ಆಡಮ್ ಅಗೆದಾಗ ಈವ್ ನೇಯ್ದಾಗ
ಇದ್ದರೆ ಇವರು ?
ಮೊಹೆಂಜೊದಾರೋದ ಶವಗಳಿಗೆಲ್ಲಾ
ಜೀವ ಏಕ್ ದಮ್ ಬಂದ ಹಾಗೆ
ಕುರುಕ್ಷೇತ್ರದಲ್ಲಿ ಹೂತವರೆಲ್ಲಾ ರಜಾದ ಮೇಲೆ ತಿರುಗುವ ಹಾಗೆ
ಎಂದೋ ಹುಟ್ಟಬೇಕಿದ್ದವರು ಫಕ್ಕನೆ ನೆನಪಾಗಿ
ಲೇಟಾಗಿ ಅವತರಿಸಿದ ಹಾಗೆ
ಪರ್ಗೆಟೋರಿಯೋದಿಂದ ತಪ್ಪಿಸಿಕೊಂಡು
ವೈತರಣೀ ನದಿಯಲ್ಲಿ ಮುಳುಗದೆ ಬಂದು
ಹಳೆ ವಿಳಾಸಗಳ ಹುಡುಕುವವರಂತೆ
ಹಣಕೀ ಹಣಕೀ ನೋಡುವರು
ನಿದ್ದೆಹೋದ ರೋಡುಗಳಲ್ಲಿ ವಾಲುತ್ತಾ ನಡೆಯುವರು
ಗಂಟೆಗಟ್ಟಳೆ ಮಾತಾಡುವರು
ಮಾತಾಡುತ್ತಾ ಇಳಿಯುವರು-ಊಟಕ್ಕೆ ಅಥವಾ ಜಗಳಕ್ಕೆ
ಹುಲಿ ಹಾಲನ್ನು ಕುಡಿದವರು ಕತ್ತೆ ಹಾಲಲ್ಲಿ ಮಿಂದವರು
ಸರಸ್ವತಿಯ ಸ್ತನದ್ವಯ ಪಂಡಿತರು
ಕತ್ತಿ ಹಿಡಿದಲ್ಲಿ ಕಲಿಗಳು
ಸಂಸ್ಕೃತಿ ಸುಧೆಯ ಎಮ್ಮೆಗಳು ಈ ಹೆಮ್ಮೆಯ ಜನರು
ಗಕ್ಕನೆ ನಿಲ್ಲುವರು ಸುಮ್ಮನೆ ಹೋಗುವರು
ಮಾನವ ದುರಂತದ ಒಂದಂಕ ಆಡುವರು
ಬಲವಂತದ ಹೇರಿನ ಕೆಳಗೆ
ಬದುಕುವರು-ಬದುಕುತ್ತೇವೆಂದು ಭ್ರಮಿಸುವರು
ಈ ಅನಾಥ ಜನರು
*****
Related Post
ಸಣ್ಣ ಕತೆ
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…